Follow on Twitter

Search it

Tuesday 27 December 2011

ಗ್ರೀನ್ ರೂಟ್ ಪಯಣದಲ್ಲಿ ಚಿತ್ರಾನ್ನ ತಿಂದದ್ದು..




'ಕಡಗರಹಳ್ಳಿ' ಸ್ಟೇಷನ್. ಇದು ಕೂಡ ನಿರ್ಮಾಣ ಹಂತದಲ್ಲಿದೆ. ಅಲ್ಲಿದ್ದ ಕೆಲಸಗಾರರಿಂದ ಸೂಕ್ತ ಮಾಹಿತಿ ಪಡೆದೆವು. ಬೆಳಗಿನ ಉಪಹಾರ ಇಲ್ಲೇ ಮುಗಿಸುವುದೆಂದು ತೀರ್ಮಾನಿಸಿ. ಅಡುಗೆ ಮಾಡಲು ಅನುಮತಿ ಪಡೆದೆವು.

ಬಾಣಸಿಗರ ಬವಣೆ...9.30 ಕ್ಕೆ ಶುರು

ಒಣಗಿದ ಸೌದೆ ತರಲು ನಾನು ಅಮೇಲೆ ವೀರಿ ಇಬ್ಬರು ಸೇರಿ ಹೋದೆವು. ಒಂದಿಷ್ಟು ಕಲೆ ಹಾಕಿದೆವು. ಆದರೆ ಅದರಲ್ಲಿ ಎಷ್ಟೊಂದು ತುಂಡುಗಳು ಮಳೆಯಲ್ಲಿ ನೆಂದಿದ್ದರಿಂದ. ಒಲೆ ಉರಿಸಲು ಸ್ವಲ್ಪ ತ್ರಾಸಾಯಿತು. ಸೋಮ, ವರ್ಲಿನ್ ಒಲೆಗೆ ಕಿಚ್ಚು ಹಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದರು. ಶಿವನ ಕೈ ಸಿಗ್ಗಿದ್ದು, ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿತ್ತು. ಸಿಕ್ಕಿದ ಜಾಗವನ್ನೆಲ್ಲ ಸೆರೆ ಹಿಡಿಯತೊಡಗಿದ್ದ.

ಇತ್ತ ವೀರಿಗೆ ಸಹನೆ ಮೀರಿತ್ತು. ಹಸಿದ ಅವನ ಮನ ನಾವು ಹೇಳಿದ ಎಲ್ಲಾ ಕೆಲಸ ಮಾಡಲು ತಯಾರಾಗಿತ್ತು. ಪಾತ್ರೆ ತೊಳೆದು, ಅಕ್ಕಿ ತೊಳೆದು, ನೀರು ತಂದು ಕೊಟ್ಟ. ಅಲ್ಲಿಗೆ ನಿಲ್ಲಲಿಲ್ಲ. ನಂತರ ಅಲ್ಲಿನ ಕಾರ್ಮಿಕರಿಂದ ಎರಡು ತಟ್ಟೆ ಕೂಡ ಸಂಪಾದಿಸಿದ. ಆದ್ರೆ ಒಲೆ ಇನ್ನೂ ಹತ್ತಿರಲಿಲ್ಲ ಸರಿಯಾಗಿ. ಏನಾದರೂ ಹತ್ತದೆ ಆಟ ಆಡಿಸುತ್ತಿತ್ತು ಬೆಂಕಿ. ಕಡೆಗೂ ನಮ್ಮ ಗೋಳು ನೋಡಕ್ಕೆ ಆಗದೆ ಬೆಂಕಿ ಉರಿಯ ತೊಡಗಿತು. ಅಂತೂ ಅನ್ನ ರೆಡಿ ಮಾಡಿ . ನೀರು ಬಸಿದು ಹರಿವಿದ್ದು ಆಯಿತು. ಈ ಗಲಾಟೆಯೆಲ್ಲ ಶಿವ ಕೆಮರಾದಲ್ಲಿ ವಿಡಿಯೋ ಮಾಡುತ್ತಿದ್ದ.

ಅವನ ಯೋಚನಾ ಲಹರಿಗೆ ಒಂದು ಸ್ಯಾಂಪಲ್ ಅಂದ್ರೆ. 'ಅಬ್ಬಾ ನಾನು ಇಲ್ಲಿಂದ ಹೋದ ಮೇಲೆ ಮೊದಲು ಪ್ರೆಟಿ ಬಾಯ್ ಮತ್ತೆ ತೆರೆ ಬಿನಾ ಸಾಂಗ್ ಕೇಳಬೇಕು ಅಂತಿದ್ದ'. ನಗರ ಜೀವನದ ಸವಿವುಂಡವನಿಗೆ ಪಕೃತಿ ಮಡಿಲಿನಿಂದ ಹೊರಬೀಳುವ ಮನಸ್ಸು ಹೇಗೆ ಬಂತೋ ನಾ ಕಾಣೆ.. ಪುಣ್ಯಾತ್ಮ. ಊಟಕ್ಕೆ ಕುಳಿತುಕೊಳ್ಳ ಬೇಕಾದ ಸ್ಥಳವನ್ನು ವೀರಿನೇ ಕ್ಲೀನ್ ಮಾಡಿದ ಅಂತಾ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ಸುತ್ತೆ. ಬಿಟ್ಟಿದ್ರೆ ನಮ್ಮ ಪಾಲಿಂದೂ ಖಾಲಿ ಮಾಡುತ್ತಿದ್ದ.

ನಮಗೆ ಅರೆಬೆಟ್ಟ ಸ್ಟೇಷನ್‌ನಲ್ಲಿ ಸಿಕ್ಕಿದ ಮಾರ್ಗದರ್ಶಿಯ ಇಲ್ಲೂ ಆಯಿತು. ಪುಣ್ಯಾತ್ಮ ಬೆಳಗ್ಗೆ 8:45 ಗೆ ಅಲ್ಲಿಂದ ಹೊರಟವನು ಇಲ್ಲಿಗೆ 11: 15 ಗೆ ತಲುಪಿದ್ದ. ಸುಮಾರು 6 ರಿಂದ 7 ಕಿಮೀ ಸರಾಸರಿಯಲ್ಲಿ ಬಂದಿದ್ದ ಅಂದ್ರೆ ನಿಜಕ್ಕೂ ಗ್ರೇಟ್. ಮುಂದಿನ ಹಾದಿಯ ವಿವರವನ್ನು ಆತನಿಂದ ಪಡೆದು. ನಮ್ಮ ಪಾತ್ರೆ ಪಗಡುಗಳನ್ನು ತೊಳೆದು ಬಳೆದು ಹೊರಟಾಗ ಗಂಟೆ 11: 45. ಸ್ವಲ್ಪ ಹೆಚ್ಚು ಹೊತ್ತೇ ಇಲ್ಲಿ ನಿಂತ್ತಿದ್ದೆವು ಅನಿಸಿತು.

No comments:

Post a Comment